

27th February 2026

ಗದಗ, 27. ಜಿಲ್ಲೆಯ ಗದಗ ತಾಲೂಕಿನ ಹೊಂಬಳ ವಲಯದ ಹುಯಿಲಗೋಳ ಕಾರ್ಯಕ್ಷೇತ್ರದಲ್ಲಿ ಮಾಶಾಸನ ಪಡೆಯುತ್ತಿದ್ದ ಹುಸೇನಮ್ಮ ಅವರಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಮನೆ ನಿರ್ಮಿಸಿ ಶನಿವಾರ ಜಿಲ್ಲಾ ನಿರ್ದೇಶಕರಾದ ಕೇಶವ ದೇವಾಂಗ ಅವರು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ತಾಲ್ಲೂಕಾ ಯೋಜನಾಧಿಕಾರಿಗಳಾದ ಉಮಾ ಮತ್ತು ಕೊಪ್ಪಳ ಪ್ರಾದೇಶಿಕ ವಿಭಾಗದ ಜ್ಞಾನವಿಕಾಸ ಯೋಜನಾಧಿಕಾರಿಗಳಾದ ಸುಧಾ ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಊರಿನ ಗಣ್ಯರು ಮತ್ತು ನವಜೀವನ ಸಮಿತಿಯ ಸದಸ್ಯರು, ವಲಯದ ಮೇಲ್ವಿಚಾರಕರು, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸೇವಾ ಪ್ರತಿನಿಧಿಗಳು ಒಕ್ಕೂಟದವರು ಉಪಸ್ಥಿತರಿದ್ದರು.
ಅತ್ಯಾಚಾರ ಪ್ರಕರಣ ಆರೋಪಿ ಶಿಕ್ಷಕ ಮಹ್ಮದ್ ಅಜುರುದ್ಧೀನ್ ಗೆ ಜೀವಿತಾವಧಿ ಶಕ್ಷೆ- ಗಂಗಾವತಿ ಜಿಲ್ಲಾ ನ್ಯಾಯಾಲಯದಿಂದ ಆದೇಶ

ಕೊಪ್ಪಳ ತಾಲೂಕಿನಲ್ಲೂ ಅನಧಿಕೃತ ರೇಸಾರ್ಟ್ಗಳಿಗೆ- ಅಧಿಕಾರಿಗಳ ತಂಡ ದಾಳಿ: ವಿದ್ಯುತ್ ಸಂಪರ್ಕ ಕಟ್- ಜಿಲ್ಲಾಧಿಕಾರಿಗಳ ಆದೇಶ: ಗ್ರಾಪಂ ಪರವಾನಿಗೆ ರದ್ದು